Thursday 8 January 2015

             ಕಳತ್ತೂರು :- ನಾಡೋಜ   ಡಾ ಎಚ್. ಎಲ್. ನಾಗೇಗೌಡ ರವರ ಜನ್ಮಶತಾಬ್ಧಿ ವರ್ಷಾಚರಣೆ  ಅಂಗವಾಗಿ ಜಾನಪದ ಸಂಚಾರ ಕಾರ್ಯಕ್ರಮವನ್ನು ಕೇರಳ ಗಡಿನಾಡ  ಘಟಕ ವು ಇಚ್ಲಂಪಾಡಿ  ಹಿರಿಯ ಬುನಾದಿ ಶಾಲೆಯಲ್ಲಿ ದಿನಾಂಕ೦೭-೦೧೨೦೧೫ಆಯೋಜಿಸಿತು .ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಶವ ಪ್ರಸಾದ್ ವಹಿಸಿದರು, ಕರ್ನಾಟಕ ರಾಜ್ಯ ಮಹಿಳ ಆಯೋಗದ  ಅಧ್ಯಕ್ಷರು  ಶ್ರೀಮತಿ ಮಂಜುಳ ಮಾನಸ ರವರು  ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ  ಉದ್ಘಾಟಿಸಿದರು.  ಕುಂಬಳೆ ಗ್ರಾಮ ಪಂಚಾಯತು  ಉಪಾಧ್ಯಕ್ಷರು ಶ್ರೀಮಂಜುನಾಥ ಆಳ್ವರು ಈ  ಕಾರ್ಯಕ್ರಮಕ್ಕೆ ಶುಭ ಹಾರೈಸಿದರು ..ನಮ್ಮ ಶಾಲಾ ಮುಖ್ಯೋಪಾಧ್ಯಾಯ ಶ್ರೀ .ಪಿ . ನರಹರಿಯವರು ಸ್ವಾಗತಿಸಿ,  ಕ. ಜಾ  ಪ. ಕೇರಳ ಗಡಿನಾಡ ಘಟಕ ಸದಸ್ಯ ಸಂಚಾಲಕರು ಲಕ್ಷ್ಮಣ ಪ್ರಭು  ವಂದಿಸಿದರು ಹಾಗೂ ಸಿ. ಕೆ.ವಸಂತ ಕುಮಾರ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು .ನಂತರ ಬೊಳಿಕೆ ತಂಡದವರಿಂದ ವಿವಿಧ ಜಾನಪದ ಹಾಡುಗಳು ಹಾಗು  ನೃತ್ಯ  ವೈವಿಧ್ಯತೆಯು ನಮ್ಮನ್ನು  ಮನರಂಜಿಸಿತು .












No comments:

Post a Comment